ಮಂಗಳೂರು: ಭಾರತ ಸೇವಾದಳ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ನಗರದ ಮಹಿಳಾ ಡಿ.ಎಡ್. ತರಭೇತಿ ಸಂಸ್ಥೆಯಲ್ಲಿ ಮಿಲಾಪ್ ಶಿಬಿರವನ್ನು ಇತ್ತೀಚೆಗೆ ನೆರವೇರಿತು.ಮಂಗಳೂರು: ಭಾರತ ಸೇವಾದಳ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ನಗರದ ಮಹಿಳಾ ಡಿ.ಎಡ್. ತರಭೇತಿ ಸಂಸ್ಥೆಯಲ್ಲಿ ಮಿಲಾಪ್ ಶಿಬಿರವನ್ನು ಇತ್ತೀಚೆಗೆ ನೆರವೇರಿತು ಈ ಕಾರ್ಯಕ್ರಮವನ್ನು ಮಹಿಳಾ ಡಿ.ಎಡ್. ತರಭೇತಿ ಸಂಸ್ಥೆಯ ಪ್ರಾಂಶುಪಾಲರಾದ ಉಷಾರವರು ಉದ್ಘಾಟಿಸಿದರು. ಬಿ.
ಪ್ರಭಾಕರ್ ಶ್ರೀಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಕಾರ್ಯದರ್ಶಿ ಉದಯ ಎಸ್. ಕುಂದರ್ 2015-16ರಲ್ಲಿ ನಡೆಯುವ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಭೆಯ ಮುಂದಿಟ್ಟು ವೇಳಾಪಟ್ಟಿಯನ್ನು ತಯಾರಿಸಲಾಯಿತು ಮತ್ತು ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇನ್ನಷ್ಟು ಶಾಖೆಗಳನ್ನು ತೇರೆಯಲು ನಿರ್ದರಿಸಲಾಯಿತು.
ಸಮಿತಿ ಸದಸ್ಯರಾದ ದುರ್ಗಾ ಪ್ರಸಾದ್, ಸುರೇಶ್ ಶೆಟ್ಟಿ, ರೇಹನಾ, ಶಾಂತಿ ಡಿ’ಸೋಜ ಉಪಸ್ಥಿತರಿದ್ದರು. ಜಿಲ್ಲಾ ಸಂಘಟಕರಾದ ಮಂಜೆಗೌಡ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment