ಮಹಾತ್ಮಗಾಂಧೀಜಿರಾಷ್ಟ್ರೀಯಗ್ರಾಮೀಣಉದ್ಯೋಗಖಾತರಿ (ಎಂಎನ್ಆರ್ಇಜಿ) ಯೋಜನೆ ಅನುಷ್ಠಾನ ಹಾಗೂ ಮಾನವದಿನಗಳ ಸೃಷ್ಟಿಯಲ್ಲಿ ಬೆಳಗಾವಿ ಜಿಲ್ಲಾಪಂಚಾಯಿತಿ ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದೆ.9 ತಿಂಗಳ ಅವಧಿಯಲ್ಲಿ 80.28 ಕೋಟಿರೂ.ಖರ್ಚುಮಾಡಿ, ಅತಿಹೆಚ್ಚು ಮಾನವದಿನ ಅಂದರೆ, 27.47ಲಕ್ಷದಿನಗಳನ್ನುಸೃಷ್ಟಿಮಾಡಿದೆ. 69.37 ಕೋಟಿರೂ. ವ್ಯಯಿಸಿ, 24.05 ಲಕ್ಷ ಮಾನವದಿನ ಸೃಷ್ಟಿಸಿರುವ ರಾಯಚೂರು ಜಿಲ್ಲೆರಾಜ್ಯಕ್ಕೆ 2ನೇಸ್ಥಾನದಲ್ಲಿದೆ. 59.40 ಕೋಟಿರೂ
. ಖರ್ಚುಮಾಡಿ, 18.75 ಲಕ್ಷ ಮಾನವದಿನ ನಿರ್ವಿುಸಿರುವ ರಾಮನಗರ ಜಿಲ್ಲೆ ತೃತೀಯಸ್ಥಾನದಲ್ಲಿದೆ. 2014-15ನೇಸಾಲಿನಲ್ಲಿ ಬೆಳಗಾವಿ ಮೂರನೇಸ್ಥಾನದಲ್ಲಿತ್ತು. ಚಿತ್ರದುರ್ಗ ಜಿಲ್ಲೆ ಮೊದಲನೇ ಸ್ಥಾನದಲ್ಲಿತ್ತು.
ಉದ್ಯೋಗಖಾತ್ರಿಯೋಜನೆಯಡಿ 2015-16ನೇಸಾಲಿನಲ್ಲಿ 9 ತಿಂಗಳ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸ ಹಾಗೂ ಮಾಡಿರುವ ಪ್ರಗತಿಯನ್ನುಅವಲೋಕಿಸಿದಾಗ ಕೇವಲ 16,348 ಮಾನವದಿನಗಳನ್ನು ನಿರ್ಮಾಣ ಮಾಡುವುದರ ಮೂಲಕ ಬೆಂಗಳೂರು ನಗರ ಜಿಲ್ಲೆ ಕೊನೆಯಸ್ಥಾನದಲ್ಲಿದೆ.
2.51 ಕೋಟಿ ಮಾನವದಿನ ನಿರ್ಮಾಣ ರಾಜ್ಯದಲ್ಲಿ 30 ಜಿಲ್ಲೆಗಳಲ್ಲಿ 9 ತಿಂಗಳಅವಧಿಯಲ್ಲಿ 2.51 ಕೋಟಿ ಮಾನವದಿನಗಳನ್ನು ಸೃಷ್ಟಿಸಲಾಗಿದೆ
ಇಲ್ಲಿಯವರೆಗೆ 940.85 ಕೋಟಿರೂ.ಗಳನ್ನು ಉದ್ಯೋಗ ಖಾತರಿ ಯೋಜನೆ ಅನುಷ್ಠಾನಕ್ಕಾಗಿ ಖರ್ಚುಮಾಡಲಾಗಿದೆ. ಉದ್ಯೋಗ ಖಾತರಿಯ ಕೂಲಿ ಹಣವನ್ನು ಈಗಾಗಲೇ ಇಲೆಕ್ಟ್ರಾನಿಕ್ನಿ ಧಿ ನಿರ್ವಹಣೆಪದ್ಧತಿ (ಇಎಫ್ಎಂಎಸ್) ಮೂಲಕ ಆಯಾಫಲಾನುವಿಗಳ ಬ್ಯಾಂಕ್ಖಾ ತೆಗೆ ಸಂದಾಯ ಮಾಡುತ್ತಿರುವುದರಿಂದ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಿದೆ.
No comments:
Post a Comment