ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಕೆಎಸ್ಆರ್ಟಿಸಿ) ಸತತ ಎರಡನೇ ಬಾರಿಗೆ ‘ಇಂಡಿಯಾ ಬಸ್ ಅವಾರ್ಡ್ಸ್– 2016’ ಲಭಿಸಿದೆ.ಪಣಜಿಯಲ್ಲಿ ನಡೆದ ಸಮಾರಂಭದಲ್ಲಿ ಗೋವಾ ಸರ್ಕಾರದ ಸಾರಿಗೆ ಸಚಿವ ಸುದಿನ್ ದಾವಲಿಕರ್ ಅವರು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ್ ಕಟಾರಿಯಾ ಅವರಿಗೆ ಪ್ರಶಸ್ತಿ ಪ್ರದಾನ
ಮಾಡಿದರು.
ಕೆಎಸ್ಆರ್ಟಿಸಿ ಫ್ಲೈಬಸ್ ಸೇವೆ, ಮಾಹಿತಿ ತಂತ್ರಜ್ಞಾನಗಳ ಉಪಕ್ರಮಗಳಿಗೆ ಈ ಪ್ರಶಸ್ತಿ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.
No comments:
Post a Comment