ಮುಂಬೈ: ಸಿಎಸ್ಟಿ ಮುಂಬೈ – ಬೆಂಗಳೂರು ಉದ್ಯಾನ ಎಕ್ಸ್ಪ್ರಸ್ ರೈಲುಗಾಡಿಯ ಎಂಜಿನ್ನ ಎರಡು ಚಕ್ರಗಳು ಛತ್ರಪತಿ ಶಿವಾಜಿ ಟರ್ಮಿನಸ್ನಲ್ಲಿ ಹಳಿ ತಪ್ಪಿದ ಪರಿಣಾಮವಾಗಿ ಹಲವಾರು ಉಪನಗರ ರೈಲು ಸೇವೆಗಳು ಗುರುವಾರ ಅಸ್ತವ್ಯಸ್ತಗೊಂಡವು.ಬೆಳಗ್ಗೆ 8.15ರ ವೇಳೆಗೆ ಪ್ಲಾಟ್ಫಾರ್ಮ್ 17ರಿಂದ ರೈಲು ಹೊರಟ ಬಳಿಕ ಸಂಭವಿಸಿದ ಈ ಘಟನೆಯಲ್ಲಿ
ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಘಟನೆ ಸಂಭವಿಸಿದ ತತ್ಕ್ಷಣವೇ ಉಪನಗರ ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಯಿತು. ಹೀಗಾಗಿ ಉಪನಗರ ರೈಲುಗಳ ಸಂಚಾರ 20-30 ನಿಮಿಷಗಳಷ್ಟು ವಿಳಂಬಗೊಂಡವು. ಜನರಲ್ ಮ್ಯಾನೇಜರ್ ಸಿ.ಆರ್. ಜಿ.ಸಿ. ಅಗರ್ವಾಲ್ ಸೇರಿದಂತೆ ಹಿರಿಯ ಅಧಿಕಾರಿಗಳು ತತ್ ಕ್ಷಣವೇ ದುರಂತ ಸ್ಥಳಕ್ಕೆ ಆಗಮಿಸಿ, ಸಂಚಾರ ಸುಗಮಗೊಳಿಸಲು ಕ್ರಮ ಕೈಗೊಂಡರು.
No comments:
Post a Comment