Thursday 7 July 2016

ಜು. 25ರಿಂದ ಕೆಎಸ್‌ಆರ್‌ಟಿಸಿ ಬಂದ್‌?

ಬೆಂಗಳೂರು: 'ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಅಸಮರ್ಪಕ ಹಾಗೂ ಏಕಪಕ್ಷೀಯವಾಗಿದೆ' ಎಂದು ಆರೋಪಿಸಿ ಜುಲೈ 25ರಿಂದ ಅಖೀಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಮತ್ತು ಎಐಟಿಯುಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿವೆ. ಪರಿಣಾಮ ಅಂದು ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.  ಶೇ. 35ರಷ್ಟು ವೇತನ ಪರಿಷ್ಕರಣೆ ಮಾಡಿ ಎಂದು ಕೇಳಲಾಗಿತ್ತು. ಆದರೆ, ಕೊಟ್ಟಿದ್ದು ಕೇವಲ ಶೇ. 8ರಷ್ಟು. ಇದನ್ನು
ವಿರೋಧಿಸಿ ಅಂದು ನಡೆಸಲು ಉದ್ದೇಶಿಸಿರುವ ಮುಷ್ಕರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸೇರಿದಂತೆ ಎಲ್ಲ ನಾಲ್ಕು ಸಾರಿಗೆ ನಿಗಮಗಳ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ಮಹಾಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ


No comments:

Post a Comment