Wednesday 6 July 2016

ಸರಕಾರಿ ಶಾಲೆ ನೆಲಸಮಕ್ಕೆ ಮುಂದಾದ ಸೇನೆ: ಪ್ರತಿಭಟನೆ


 ಬೆಂಗಳೂರು: ಶತಮಾನ ಪೂರೈಸಿರುವ ಜೆ ಸಿ ನಗರದ ನಾಲ್ಕು ಸರಕಾರಿ ಶಾಲೆಗಳು ಹಾಗೂ ಪಿಯು ಕಾಲೇಜು ಕಟ್ಟಡ ನೆಮಸಮಗೊಳಿಸಲು ಸೇನಾ ಸಿಬ್ಬಂದಿ ಮುಂದಾದ ಪರಿಣಾಮ, ಇಲ್ಲಿ ವ್ಯಾಸಂಗ ಮಾಡುತ್ತಿರುವ 1200 ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.ಸೇನಾ ಸಿಬ್ಬಂದಿ ಯಾವಾಗ ಶಾಲೆ ನೆಲಸಮಗೊಳಿಸುವರೋ ಎಂಬ ಆತಂಕದಲ್ಲೇ ವಿದ್ಯಾರ್ಥಿಗಳು
ಮಂಗಳವಾರ ಮನೆ ಸೇರಿದ್ದಾರೆ. ಶಾಲೆ ಜಾಗಕ್ಕೆ ಪರ್ಯಾಯ ಜಾಗ ಕೊಡುವ ಇಲ್ಲವೇ ಬಾಡಿಗೆ ಕಟ್ಟುವ ಪ್ರಸ್ತಾವನೆಯನ್ನು
 ಶಿಕ್ಷಣ ಇಲಾಖೆ ಸದ್ಯಕ್ಕೆ ಮುಂದಿಟ್ಟಿದ್ದು, ಇದಕ್ಕೆ ಸೇನೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಹಿನ್ನೆಲೆ
ಶಾಲೆಗೆ ಸೇರಿದ ಜಾಗದ ವಿಚಾರವಾಗಿ ಮೂರು ದಶಕಗಳ ಕಾಲ ಪ್ಯಾರಾಚೂಟ್‌ ರೆಜಿಮೆಂಟ್‌ ಹಾಗೂ ರಾಜ್ಯ ಸರಕಾರದ ನಡುವಿನ ಕಾನೂನು ಸಮರದಲ್ಲಿ ಪ್ಯಾರಾಚೂಟ್‌ ರೆಜಿಮೆಂಟ್‌ ಪರ ತೀರ್ಪು ಬಂದಿದೆ. ಕಾನೂನು ಸಮರದಲ್ಲಿ ಗೆದ್ದಿರುವ ರೆಜಿಮೆಂಟ್‌ ಶಾಲೆ ಇರುವ ಜಾಗವನ್ನು ಮಂಗಳವಾರ ಮಧ್ಯಾಹ್ನ ತನ್ನ ವಶಕ್ಕೆ ತೆಗೆದುಕೊಂಡಿದೆ. ಇದನ್ನು ಖಂಡಿಸಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಮಂಗಳವಾರ ಮಧ್ಯಾಹ್ನದಿಂದ ರಾತ್ರಿವರೆಗೂ ಪ್ರತಿಭಟನೆ ನಡೆಸಿದರು. ಶಿಕ್ಷಣ ಇಲಾಖೆ ಆಯುಕ್ತರು ದೌಡಾಯಿಸಿ ಬಂದು ಮನವಿ ಮಾಡಿದರೂ ಸೇನಾ ಸಿಬ್ಬಂದಿ ಮಾತ್ರ ನಿಲುವು ಬದಲಿಸಲಿಲ್ಲ. ಸ್ಥಳೀಯ ಕಾರ್ಪೋರೇಟರ್‌ ಸೇರಿದಂತೆ ಹಲವು ಮುಖಂಡರು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಮಧ್ಯೆ ಶಿಕ್ಷಣ ಸಚಿವರ ಮಧ್ಯ ಪ್ರವೇಶದಿಂದ ಮಂಗಳವಾರ ಶಾಲೆ ನೆಲಸಮಗೊಳ್ಳುವುದು ತಪ್ಪಿದೆ.
ಜೂ.14ರಂದು ರಕ್ಷಣಾ ನ್ಯಾಯಾಲಯ ನೀಡಿರುವ ತೀರ್ಪು ಹಾಗೂ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಶಾಲೆಯ ಪ್ರಾಂಶುಪಾಲರು ಸಲ್ಲಿಸಿದ್ದ ಕೇವಿಯೆಟ್‌ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಪ್ಯಾರಾಚೂಟ್‌ ರೆಜಿಮೆಂಟ್‌ ತರಬೇತಿ ಕೇಂದ್ರದ ಅಕಾರಿಗಳು 2.5 ಎಕರೆಯಷ್ಟು ಜಾಗವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮಂಗಳವಾರ ಮಧ್ಯಾಹ್ನ ಶಾಲೆಗೆ ನೋಟಿಸ್‌ ಅಂಟಿಸಿದ್ದರು. ಅಲ್ಲದೆ ''ಎರಡು ತಾಸು ಬಿಟ್ಟು ಬರುತ್ತೇವೆ. ಅಷ್ಟರೊಳಗೆ ಶಾಲಾ ಆವರಣವನ್ನು ಖಾಲಿ ಮಾಡಬೇಕು. ನಾವು ಬೀಗ ಹಾಕುತ್ತೇವೆ''ಎಂದು ಹೇಳಿದ್ದರು. ಅಲ್ಲದೇ ಅಕಾರಿಗಳು ಅಂಟಿಸಿದ್ದ ನೋಟಿಸ್‌ನಲ್ಲಿ ಕಟ್ಟಡವನ್ನು ಒಡೆದು ಹಾಕಬಹುದು ಎಂಬ ಆದೇಶ ಇದ್ದ ಕಾರಣ ಶಾಲೆಯ ಪ್ರಾಂಶುಪಾಲರು, ಮಕ್ಕಳು ಹಾಗೂ ಮಕ್ಕಳ ಪಾಲಕರು ತೀವ್ರ ಆತಂಕಗೊಂಡಿದ್ದರು. ಸಂಜೆ 3 ಗಂಟೆಗೆ ಆರಂಭವಾದ ಹೈಡ್ರಾಮಾ ರಾತ್ರಿ 8 ಗಂಟೆವರೆಗೂ ನಡೆಯಿತು.
ಶಾಲೆಯನ್ನು ಕೆಡವುತ್ತಾರೆ ಎಂಬ ಸುದ್ದಿ ಸುತ್ತಲಿನ ಪ್ರದೇಶಗಳಲ್ಲಿ ಹಬ್ಬುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಪಾಲಕರು ಆಗಮಿಸಿ ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಮಕ್ಕಳು ಕೂಡಾ 'ಶಾಲೆ ಬೇಕು, ನ್ಯಾಯ ಬೇಕು' ಎಂದು ಘೋಷಣೆ ಕೂಗತೊಡಗಿದರು. ಅಲ್ಲದೇ, ಶಾಲೆ ಅವ ಮುಗಿದರೂ ಮನೆಗೆ ಹೋಗಲು ನಿರಾಕರಿಸಿದ ಮಕ್ಕಳು, ಕೊಠಡಿಗಳು ಹಾಗೂ ಆವರಣದಲ್ಲಿ ಪುಸ್ತಕ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.
ಮತ್ತೊಂದೆಡೆ ಪ್ಯಾರಾ ರೆಜಿಮೆಂಟ್‌ನ ಸಿಬ್ಬಂದಿ ಶಾಲಾ ಆವರಣದಲ್ಲಿ ತಾತ್ಕಾಲಿಕ ಟೆಂಟ್‌ ಹಾಕಿದರು. ಇದರಿಂದ ವಾತಾವರಣ ಮತ್ತಷ್ಟು ಬಿಗಿಗೊಂಡಿತು. ಸೇನೆ ಸಿಬ್ಬಂದಿ ಮೂರು ಗೇಟ್‌ಗಳನ್ನು ಬಂದ್‌ ಮಾಡಿ ಭದ್ರತೆಗೆ ನಿಂತರು. ಈ ವೇಳೆ ಸ್ಥಳೀಯರು ಗೇಟ್‌ ತಳ್ಳಿ ಒಳ ನುಗ್ಗಿ ಪ್ರತಿಭಟನೆ ಆರಂಭಿಸಿದರು.
ಶಿಕ್ಷಣ ಇಲಾಖೆ ಅಕಾರಿಗಳ ದೌಡು
ಶಾಲಾ ಪ್ರಾಂಶುಪಾಲರಿಂದ ಸುದ್ದಿ ತಿಳಿಯುತ್ತಿದ್ದಂತೆ ಪಾಲಿಕೆ ಸದಸ್ಯ ಗಣೇಶ ಮಾನೆ, ಶಿಕ್ಷಣ ಇಲಾಖೆ ಬಿಇಒ, ಡಿಡಿಪಿಐ ಸೇರಿದಂತೆ ಕೆಲ ಅಕಾರಿಗಳು ಹಾಗೂ ಸಾರ್ವಜನಿಕ ಇಲಾಖೆ ಆಯುಕ್ತೆ ಸೌಜನ್ಯ ಆಗಮಿಸಿದರು. ಈ ವೇಳೆ ಸೇನೆಯ ಹಿರಿಯ ಅಕಾರಿಗಳ ಜತೆ ಚರ್ಚೆ ನಡೆಸಿದರು.
ಬಿಇಒ, ಡಿಡಿಪಿಐ ಅಮಾನತು ಆದೇಶ
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರು ಸೇನೆ ಅಕಾರಿಗಳು, ಶಿಕ್ಷಣ ಇಲಾಖೆ ಅಕಾರಿಗಳು ಹಾಗೂ ಶಾಲೆಯ ಪ್ರಾಂಶುಪಾಲರ ಜತೆ ಸಭೆ ನಡೆಸಿದರು. ಸೇನೆಯ ಅಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದ ಬಳಿಕ ಕರ್ತವ್ಯ ಲೋಪ ಆರೋಪದಲ್ಲಿ ಡಿಡಿಪಿಐ ಮಂಜುನಾಥ ಹಾಗೂ ಉತ್ತರ ವಲಯ ಬಿಇಒ ರಮೇಶ ಅವರನ್ನು ಸ್ಥಳದಲ್ಲೇ ಅಮಾನತುಗೊಳಿಸಿದರು. ನೂರಾರು ವರ್ಷಗಳ ಇತಿಹಾಸವಿದ್ದರೂ, ನ್ಯಾಯಾಲಯದಲ್ಲಿ ಸೂಕ್ತ ವಾದ ಮಾಡಿ ಶಾಲೆಯನ್ನು ಉಳಿಸಿಕೊಳ್ಳಲು ವಿಫಲರಾದ ಆರೋಪದಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದರು.
ಶಾಲೆ ಜಾಗಕ್ಕೆ ಬಾಡಿಗೆ ನೀಡುತ್ತೇವೆ
ಸೇನೆ ಅಕಾರಿಗಳ ಜತೆ ಮಾತನಾಡಿದ ಸಚಿವ ತನ್ವೀರ್‌ ಸೇಠ್‌, ''ಶಾಲೆ ಇರುವ ಸ್ಥಳ ಕಾನೂನು ಬದ್ಧವಾಗಿ ಸೇನೆಯದ್ದೇ ಆಗಿರುವ ಕಾರಣ ನಮ್ಮ ಆಕ್ಷೇಪವಿಲ್ಲ. ಆದರೆ, ಶಾಲೆಗೆ ಬೀಗ ಹಾಕುವುದು ಅಥವಾ ಕೆಡವುದು ಬೇಡ. ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ, ನಿಮ್ಮ ಆಸ್ತಿಗೆ ನಾವು ಬಾಡಿಗೆ ಕಟ್ಟುತ್ತೇವೆ. ಅಥವಾ ಅದಕ್ಕೆ ಪರ್ಯಾಯವಾಗಿ ಸರಕಾರದಿಂದ ಬೇರೆ ಕಡೆ ಜಮೀನು ಕೊಡಿಸುತ್ತೇವೆ. ಗುರುವಾರ (ಜೂ.7) ಕೇಂದ್ರ ರಕ್ಷಣಾ ಸಚಿವ ಮನೋಹರ್‌ ಪರಿಕರ್‌ ಅವರು ಕಾರ್ಯಕ್ರಮ ನಿಮಿತ್ತ ನಗರದ ಎಚ್‌ಎಎಲ್‌ ಕಾರ್ಪೊರೇಟ್‌ ಕಚೇರಿಗೆ ಭೇಟಿ ನೀಡಲಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ರಕ್ಷಣಾ ಸಚಿವರ ಜತೆ ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬರಲಾಗುವುದು,''ಎಂದು ತನ್ವೀರ್‌ ಸೇಠ್‌ ಸೇನೆ ಅಕಾರಿಗಳಿಗೆ ಹೇಳಿದರು.
ಸಚಿವರ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದ ಸೇನೆಯ ಅಕಾರಿಗಳು, ನಮ್ಮ ಮೇಲಕಾರಿಗಳಿಗೆ ವಿಷಯ ತಿಳಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿ ಅಲ್ಲಿಂದ ಹೊರಟು ಹೋದರು. ರಾತ್ರಿ 8 ಗಂಟೆ ಸುಮಾರಿಗೆ ಶಾಲೆ ಆವರಣದಲ್ಲಿನ ಹೈಡ್ರಾಮಾ ಅಂತ್ಯಗೊಂಡಿತು.
ಶಾಲೆ ಹಿನ್ನೆಲೆ
- 1885ರಲ್ಲಿ ಮೈಸೂರು ಸಂಸ್ಥಾನ ಮಹಾರಾಜರಿಂದ ಸೇನೆಗೆ ಸುಮಾರು 150 ಎಕರೆಗೆ ಹೆಚ್ಚು ಜಮೀನು ಹಸ್ತಾಂತರ
- ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯ ಮಕ್ಕಳ ವ್ಯಾಸಂಗಕ್ಕೆ ಸ್ವಲ್ಪ ಜಮೀನು ಮೀಸಲು
- 1905ರಲ್ಲಿ ಉರ್ದು ಶಾಲೆ ಆರಂಭ
- ಹಂತ ಹಂತವಾಗಿ ಶಾಲಾ, ಕಾಲೇಜುಗಳು ಆರಂಭ
- 1987ರಲ್ಲಿ ಶಾಲೆ ಆವರಣದ ಮಾಲೀಕತ್ವದ ಕುರಿತು ತಕರಾರು ಆರಂಭ
- 2016 ಜೂ.14ರಂದು ಶಾಲೆ ಇರುವ ಸ್ಥಳ ಸೇನೆಗೆ ಸೇರಿದ್ದು ಎಂಬ ತೀರ್ಪು
ಯಾವ್ಯಾವ ಶಾಲೆಗಳು
ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ
ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ
ಸರಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆ
ಸರಕಾರಿ ಪದವಿಪೂರ್ವ ಕಾಲೇಜು (ವಿಜ್ಞಾನ, ಕಲೆ ಹಾಗೂ ವಾಣಿಜ್ಯ)
ಸರಕಾರಿ ಪ್ರೌಢಶಾಲಾ ವಿಭಾಗ
ವಿವಾದ ಇದ್ದ ಕಾರಣ ಹಲವು ವರ್ಷಗಳಿಂದ ಅಭಿವೃದ್ಗೆ ಅವಕಾಶವಿರಲಿಲ್ಲ. ಚಾವಣಿ ಸೋರಿಕೆ, ಶೌಚಾಲಯ ಸೇರಿದಂತೆ ಯಾವೊಂದು ಮೂಲ ಸೌಕರ್ಯ ಅಭಿವೃದ್ಗೆ ಅವಕಾಶ ಕಲ್ಪಿಸಿರಲಿಲ್ಲ. ಈ ನಡುವೆ ರಕ್ಷಣಾ ನ್ಯಾಯಾಲಯದ ತೀರ್ಪು ದೊಡ್ಡ ಹೊಡೆತ ನೀಡಿದೆ. ಶಾಲೆಗಳು ಹಾಗೂ ಕಾಲೇಜಿಗೆ ಬೀಗ ಹಾಕುವುದರಿಂದ ಸಾವಿರಾರು ಮಕ್ಕಳಿಗೆ ತೊಂದರೆ ಆಗುತ್ತದೆ. ಹೀಗಾಗಿ, ಶಾಲೆ ನಡೆಸಲು ಅವಕಾಶ ನೀಡಬೇಕು.
- ಇಶ್ರತ್‌ ಸುಲ್ತಾನ, ಪ್ರಾಂಶುಪಾಲರು
---
ಸೇನೆಗೆ ಸೇರಿದ ಆಸ್ತಿಯಲ್ಲಿ ಶಾಲೆ ಇರುವ ಕಾರಣ ಅವರಿಗೆ ಬಾಡಿಗೆ ನೀಡಲಾಗುವುದು. ಸರಕಾರ ಮಟ್ಟದಲ್ಲಿ ಚರ್ಚಿಸಿ ಪರ್ಯಾಯ ಜಮೀನು ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ. ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಡಿಡಿಪಿಐ ಹಾಗೂ ಬಿಇಒ ಅಮಾನತು ಮಾಡಲಾಗಿದೆ. ಶಾಲೆಗೆ ವ್ಯತಿರಿಕ್ತವಾಗಿ ತೀರ್ಪು ಬರಲು ಕಾರಣವಾಗಿರುವ ನಿರ್ಲಕ್ಷ್ಯತನ ತೋರಿರುವ ಬೇರೆ ಅಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
- ತನ್ವೀರ್‌ ಸೇಠ್‌, ಸಚಿವರು
---
ನೂರಾರು ವರ್ಷಗಳಿಂದ ಶಾಲೆ ನಡೆಯುತ್ತಿರುವುದಕ್ಕೆ ದಾಖಲೆಗಳಿವೆ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯತನದಿಂದ ಅತ್ಯಮೂಲ್ಯ ಜಾಗ ಸೇನೆ ಪಾಲಾಗಿದೆ. ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಂಡಿಸಿದ್ದಾರೆ ಈ ರೀತಿ ಆಗುತ್ತಿರಲಿಲ್ಲ.
- ರಬ್ಬಾನಿ, ಸ್ಥಳೀಯರು
---
ವಿಧಾನಸಭೆಯಲ್ಲಿ ಪ್ರತಿಧ್ವನಿ
ನಗರದ ಜೆ.ಸಿ.ನಗರದ ಸರಕಾರಿ ಶಾಲೆಗೆ ಸೇನಾ ಸಿಬ್ಬಂದಿ ಬೀಗ ಹಾಕಿ ತೆರವಿಗೆ ಮುಂದಾಗಿರುವ ಪ್ರಕರಣ ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಧ್ವನಿಸಿತು. ತಕ್ಷಣ ಸೇನಾ ಅಕಾರಿಗಳೊಂದಿಗೆ ಮಾತನಾಡಿ ಶಾಲೆ ತೆರವು ಮಾಡುವ ಪ್ರಕ್ರಿಯೆ ತಡೆಹಿಡಿಯುವಂತೆ ಮನವಿ ಮಾಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ತಿಳಿಸಿದರು.
ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ವೈ.ಎ.ನಾರಾಯಣಸ್ವಾಮಿ ವಿಷಯ ಪ್ರಸ್ತಾಪಿಸಿ, ಸೇನಾ ಸಿಬ್ಬಂದಿ ಮಂಗಳವಾರ ದಿಢೀರ್‌ ಹಾಜರಾಗಿ 1,800 ಮಕ್ಕಳನ್ನು ಶಾಲೆಯಿಂದ ಹೊರಹಾಕಿ ಬೀಗ ಹಾಕಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು. ಸದಸ್ಯರ ಪ್ರಸ್ತಾಪಕ್ಕೆ ಸ್ಪಂದಿಸಿದ ಸಚಿವ ತನ್ವೀರ್‌ ಸೇಠ್‌, ''2013 ರಿಂದಲೂ ವಿವಾದಕ್ಕೆ ಸಂಬಂಸಿದಂತೆ ಸರಕಾರ ಸೇನಾ ಅಕಾರಿಗಳ ಜತೆಗೆ ಪತ್ರ ವ್ಯವಹಾರ ನಡೆಸುತ್ತಿದೆ. ಆರ್ಮಿ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಸೇನಾ ಸಿಬ್ಬಂದಿ ಶಾಲೆ ತೆರವಿಗೆ ಮುಂದಾಗಿದ್ದು, ತಕ್ಷಣಕ್ಕೆ ಈ ಪ್ರಕ್ರಿಯೆ ತಡೆಹಿಡಿಯುವಂತೆ ಸೇನಾ ಅಕಾರಿಗಳೊಂದಿಗೆ ತಕ್ಷಣ ಮಾತನಾಡಿ ಮನವಿ ಮಾಡಲಾಗುವುದು. ಅಡ್ವೊಕೇಟ್‌ ಜನರಲ್‌ ಜತೆ ಚರ್ಚಿಸಿ ಮುಂದಿನ ಕಾನೂನು ಹೋರಾಟ ಮುಂದುವರಿಸಲಾಗುವುದು,''ಎಂದು ಭರವಸೆ ನೀಡಿದರು.

No comments:

Post a Comment