Tuesday, 5 July 2016

ಕಾಸರಗೋಡು ಹೆದ್ದಾರಿಯಲ್ಲಿ ಬೃಹತ್ ಹೊಂಡಗಳು

ಕಾಸರಗೋಡು : ಮಳೆಗಾಲ ಬಿರುಸುಗೊಳ್ಳುತ್ತಿದ್ದಂತೆ ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಲವಡೆ ಬೃಹತ್ ಹೊಂಡಗಳು ಬಾಯ್ದೆರೆದುಕೊಂಡಿದೆ. ಕುಂಬಳೆಯಿಂದ ಕಾಸರಗೋಡು ಹೊಸ ಬಸ್ಸು ನಿಲ್ದಾಣ ತನಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಡಾಂಬರು ಎದ್ದು ಹೋಗಿ ಹೊಂಡಗಳು ಉಂಟಾಗಿದ್ದು, ಮಳೆಗೆ ನೀರು ತುಂಬಿರುವುದರಿಂದ ಗಮನಕ್ಕೆ ಬರದೆ ವಾಹನಗಳು ಅಪಘಾತಕ್ಕೀಡಾಗುತ್ತಿದೆ. ಹೊಂಡ ತಪ್ಪಿಸುವ ಭರದಲ್ಲಿ ಹಲವು ವಾಹನಗಳು ಎದುರಿನಿಂದ ಬರುವ
ವಾಹನಗಳಿಗೆ ಡಿಕ್ಕಿ ಹೊಡೆದ ಹಲವು ಘಟನೆಗಳು ನಡೆದಿದೆ. ಅಡ್ಕತ್ತಬೈಲ್, ಕರಂದಕ್ಕಾಡ್ ನಲ್ಲಿ ಹಲವು ಹೊಂಡಗಳು ಉಂಟಾಗಿದ್ದು, ಸಂಚಾರ ದುಸ್ತರವಾಗುತ್ತಿದೆ.

ಮೊಗ್ರಾಲ್ ಪುತ್ತೂರು, ಚೌಕಿ, ಹೊಸಬಸ್ಸು ನಿಲ್ದಾಣ ಪರಿಸರ ಮೊದಲಾದೆಡೆ ಹೊಂಡಗಳು ಪ್ರಯಾಣಿಕರ ತಾಳ್ಮೆ ಪರೀಕ್ಷಿಸುತ್ತಿದೆ. ಮಳೆ ಬರುವ ಹಾಗೂ ರಾತ್ರಿ ಸಂದರ್ಭಗಳಲ್ಲಿ  ಚಾಲಕರಿಗೆ ಈ ಹೊಂಡಗಳು ಗಮನಕ್ಕೆ ಬರದೆ ಅಪಘಾತಕ್ಕೆ ಕಾರಣವಾಗುತ್ತಿದೆ. ಬೈಕ್ ಸೇರಿದಂತೆ ಲಘು ವಾಹನಗಳಿಗೆ ಹೊಂಡಗಳು ಹೆಚ್ಚಿನ  ಅಪಾಯ ವನ್ನುಂಟು ಮಾಡುತ್ತಿದೆ. ಬೈಕ್ ಗಳು  ನಿಯಂತ್ರಣ ತಪ್ಪಿ ಅಪಘಾತಕ್ಕೆ ಸಿಲುಕುತ್ತಿವೆ. ಕಳೆದ ಮಳೆಗಾಲದಲ್ಲಿ ಕುಂಬಳೆಯಿಂದ  ತಲಪಾಡಿ ತನಕ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿತ್ತು. ಈ ಬಾರಿ  ಕುಂಬಳೆ ಮೊಗ್ರಾಲ್ ನಿಂದ  ಕಾಸರಗೋಡು ತನಕ ರಸ್ತೆ ಹದೆಗೆಟ್ಟಿದೆ. ವರ್ಷ೦ಪ್ರತಿ ಮಳೆಗಾಲದಲ್ಲಿ ಕಾಸರಗೋಡು- ಮಂಗಳೂರು  ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಗೆ ಕೊನೆ ಇಲ್ಲದಂತಾಗಿದೆ.

No comments:

Post a Comment